ಬೆಳ್ಳಿ ಚುಕ್ಕಿ

ಸಭಾದಾಗ ಕೂತುಕೊಂಡು ಇವರು
ನಮ್ಮ ಮೇಲೆ ಕಾನೂನು ಮಾಡ್ತಾರ,
ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು
ಓಟ ಕೇಳಲಿಕ್ಕೆ ಬರತಾರ.
ನಮ್ಮ ಉದ್ಧಾರವೇ ತಮ್ಮ ಧೈಯ
ಅಂತ ಹೇಳಿ ಘೋಷಣೆ ಕೊಡ್ತಾರ
ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ.
ನಾವು ಇವರಿಗೆ ಬ್ಯಾಡಂತ.
ನಮ್ಮ ಓಟ ಮಾತ್ರ ಬೇಕಂತ.
ಊರಾಗ ನಾವು ಇದ್ರ ಸರಿ
ಕಾಣೋದಿಲ್ಲಂತ ಬುಲ್ಡೊಜರ ಹಚ್ಚಿ
ನಮ್ಮ ಗುಡಿಸಲು ನೆಲಸಮ ಮಾಡ್ತಾರ.
ಆಗಾಗ ಅವಕ್ಕೆ ಬೆಂಕಿ ಇಟ್ಟು
ಹೋಳಿ ಆಡ್ತಾರ ಜೀವಂತ ಸುಡ್ತಾರ
ಆ ಪರದೇಶಿಗಳು ಬಂದಾಗ
ನಮ್ಮ ಜೋಪಡಿ ಅವರ ಕಣ್ಣಿಗೆ ಬೀಳದಂಗ
ಭಾಳ ಎಚ್ಚರಿಕೆ ವಹಿಸಿ,
ಅವರ ಜೊತೆಗೇನೆ ತಿರಗ್ತಾರ.
ಆಗಾಗ ನಮ್ಮ ಉದ್ಧಾರಕ್ಕೆ
ಸಭೆನೂ ಕರೀತಾರ
ಸನ್ಮಾನ ಮಾಡ್ಕೊತಾರ
ಎರ್‌ಕಂಡಿಷನ್ ಕಾರಿನ್ಯಾಗ ಕೂತು
ಹಾರ ಹಾಕ್ಕೋತಾರ.
ನಮ್ಮ ಉದ್ಧಾರಕ್ಕ ಹೊರಟಾರಿವರು.
ನಮ್ಮ ಮ್ಯಾಲೇನೇ ದೊಡ್ಡ ದೊಡ್ಡ
ಕಾನೂನಿನ ಪುಸ್ತಕನೂ ಬರ್‍ದಾರಿವರು
ಅಂದು ಗಾಂಧಿ ಮುದುಕ
ಅರ್ಧಕ್ಕೆ ಬಿಟ್ಟ ಕೆಲಸ ಪೂರ್ತಿ
ಮಾಡಾಕ ಹತ್ತಾರಂತ ಇವರು.
ಅವನ ಹೆಸರಿನ ಮಂತ್ರ
ಆಗ್ಯಾದ ಇವರ ರಾಜಕೀಯ ತಂತ್ರ
ಅವನ ಟೊಪ್ಪಿಗಿ ಹಾಕ್ಕೊಂಡು
ಓಟ ಕೇಳಲಿಕ್ಕೆ ಬರತಾರಿವರು.
ನಾವು ಹಸಿವಿನಿಂದ ಸಾಯ್ತಿದ್ದೀವಿ
ಹೊಟ್ಟೆ ಬಟ್ಟೆ ಕಟ್ಟಿ ಅಸಮತೆಯ
ತ್ಯಾಗ ಬೇಯಾಕತ್ತೀವಿ.
ತಣಯ ಕಾಲೀಗಿ ಬೂಟು ಮೆಟ್ಟು ಹೊಲಿದು
ಬರಿಗಾಲಿಂದು ತಿರುಗಾಕತ್ತೀವಿ
ನಮ್ಮ ಕೇಂಪನ್ನ ರಕ್ತ ಸುಟ್ಟು
ಕಪ್ಪನ ಹೊಗೆಯರಾಗಿ,
ಕಾರ್ಖಾನೆ ಕೊಳವೆಯಿಂದ
ಕರಿಮೋಡಾಗಿ ಹೊರಹೊಮ್ಮಲಿಕತ್ತ್ಯಾದ
ಸುತ್ತೆಲ್ಲಾ ಭೀಕರ ಕತ್ತಲ ಮುತ್ತ್ಯಾದ
ಅಲ್ಲಿ ನೋಡು ಮೋಡದಲ್ಲಿ.
ಬೆಳ್ಳಿಚುಕ್ಕಿಯೊಂದು ಹೊಳಿಲಿಕತ್ತ್ಯಾದ
ಅದರ ಬೆಳಕಿನ್ಯಾಗ
ಮುಂದಕ್ಕ ಸಾಗೋಣ ನಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣಲೆಂದು ನಿಂದಲ್ಲೇ ನಿಂದರೇನು ಬಂತು?
Next post ನಿಮಗ್ಯಾಕೆ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys